ನೇತ್ರಾವತಿ

ಪ್ರತಿ ಕ್ಷಣದಲ್ಲಿ ಪ್ರೀತಿ ಅಲೆ ಅಲೆಗಳಲಿ
ನಿರಾಳ ಪ್ರೇಮ ಹುಟ್ಟಿದ ತಂಪು
ತೂಗಿ ತೂಗಿ ತಿಳಿಗಾಳಿ ಗದ್ದೆ ಬಯಲು
ಎದೆ ತುಂಬಿ ಹಾಡಿದ ಸುಗ್ಗೀ ಪದ
ಜೀವನ ಜನಪದ ಕಣ್ಣುಗಳರಳಿಂದ
ಕಾಂತಿ ಹರಿಸಿದ ನೇತ್ರಾವತಿ.

ಹರಿಯುವ ಹರಿಗೋಲು ಹಾಯ್ದು ಧಾರಿಣಿ
ಮದು ಸೂಸಿದ ತಿಳಿಹಾಲು ಎದೆಗಿಳಿದ
ಗತಿ ಗುಣದ ಕ್ರಮ ಪರಿಚಲನೆ
ಅಂಗಳದಲ್ಲಿ ಅರಳಿ ಸೂಸಿದ ಮಲ್ಲಿಗೆ
ಪಸರಿಸಿದ ಹರಡಿ ಹಾಯ್ದ ಬೆಳದಿಂಗಳ
ಬಯಲು ಆಲಯ ಧ್ವನಿ ತರಂಗಳು ಅವಳ ಹಾಡು.

ಬೆಳ್ಳಗೆ ತೆಳ್ಳಗೆ ಹಗುರಾಗಿ ತೇಲಿದ ಬಿಳಿಗೆರೆ
ಜಿಗಿ ಜಿಗಿದು ನೆನೆನೆನೆದು ಹನಿಗಳೊಡಗೂಡಿ
ಜಾರು ಬಂಡಿ ಆಟ ಕರುಣಿಯ ನೋಟ
ಸುರಿ ಸುರಿದು ಹರಿದ ಝರಿ ನದಿಯಾಗಿ
ಸುಳಿದು ಸುಳಿದು ಹೆಜ್ಜೆಗಳು ಜಾರಿ
ಕಣಿವೆ ತುಂಬ ಬೆವರ ಹನಿಗಳು.

ಮುಗಿಯದ ಹಾದಿತುಂಬ ಹಿಮದಚಳಿ
ತಿಳಿಮೋಡ ತೇಲಿ ಪ್ರತಿಫಲಿಸಿದ ಕನ್ನಡಿ
ಒಳಹೊರಗೆ ಚಿಮ್ಮಿ ಹಾಡಿ ಧ್ವನಿಸುವ ಹಕ್ಕಿಗಳು
ಸುತ್ತಿ ಸುಳಿದು ಸುತ್ತುವ ಕಾಲುಹಾದಿಯ ಹೆಜ್ಜೆಗಳು
ಆಕಾಶಕ್ಕೆ ನೀಲಿ ತುಂಬಿ ಶಿಖರಬಿಂಬ ಅಂತರಿಕ್ಷ
ಒಡಲಲಿ ಕಡಲಲಿ ಹುಟ್ಟಿದ ಭವ್ಯ ಮತ್ತು ಕಾವ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೆಳೆತ
Next post ಪಯಣಿಗರು

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys